ಅದ್ದೂರಿಯಾಗಿ ಸ೦ಪನ್ನಗೊ೦ಡ ಕಂದಾವರ ರಘುರಾಮ ಶೆಟ್ಟರ 80ರ ಸಂಭ್ರಮ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ನವ೦ಬರ್ 18 , 2015
|
ನವ೦ಬರ್ 18, 2015
|
ಅದ್ದೂರಿಯಾಗಿ ಸ೦ಪನ್ನಗೊ೦ಡ ಕಂದಾವರ ರಘುರಾಮ ಶೆಟ್ಟರ 80ರ ಸಂಭ್ರಮ
ಬಸ್ರೂರು :
ಖ್ಯಾತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟರ ಸಹಸ್ರ ಚಂದ್ರದರ್ಶನ ಅಭಿನಂದನೆ ಮತ್ತು ಅಭಿನಂದನಾ ಗ್ರಂಥ ``ಕೆಂದಾವರೆ`` ಇದರ ಲೋಕಾರ್ಪಣಾ ಸಮಾರಂಭ ಬಸ್ರೂರು ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ರಮಾನಾಥ ನಾಯ್ಕ್ ವೇದಿಕೆಯಲ್ಲಿ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಮುಖ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆ ಬೆಂಗಳೂರು ಇದರ ಆರ್ಥಿಕ ನಿಯಂತ್ರಿಕ ಶಾನಾಡಿ ಅಜಿತ ಕುಮಾರ್ ಹೆಗ್ಡೆಯವರು ಕಂದಾವರದವರ ಅಭಿನಂದನಾ ಗ್ರಂಥ ``ಕೆಂದಾವರೆ``ಯನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಕಂದಾವರ ಪ್ರತಿಷ್ಟಾನದ ಪ್ರಶಸ್ತಿಯನ್ನು ಭಾಗವತ ಸುರೇಶ ಶೆಟ್ಟರಿಗೆ ನೀಡಲಾಯಿತು. ಪೊಲ್ಯ ಉಮೇಶ ಶೆಟ್ಟರು ಸುರೇಶ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಿದರು.
ಅಭಿನಂದನಾ ಭಾಷಣ ಮಾಡಿದ ಮಣಿಪಾಲದ ಎಂ. ಐ. ಟಿ. ಪ್ರಾದ್ಯಾಪಕ ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟರು ಸುರೇಶ ಶೆಟ್ಟರು ಭಾಗವತಿಕೆಯಲ್ಲಿ ಯಾರ ಅನುಕರಣೆ ಮಾಡದೆ ಸ್ವಂತ ಶೈಲಿಯಲ್ಲಿ ಉನ್ನತಿಗೇರಿದವರು. ಕಲಾವಿದನ ಸಾಮರ್ಥ್ಯನೋಡಿ ಪದ್ಯ ಹೇಳುವ ಅವರ ಗುಣ ಇತರರಿಗೆ ಅನುಕರಣೀಯ. ಬಂಟರು ಯಕ್ಷಗಾನದಲ್ಲಿ ತೊಡಗಲು ಹಿಂಜರಿಯುತಿದ್ದ ಕಾಲಘಟ್ಟದಲ್ಲಿ ಭಾಗವತಿಕೆಗೆ ಮೇಳ ಸೇರಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು. ಕಂದಾವರ ದಂಪತಿಗಳನ್ನು ಸಮಿತಿ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಅಭಿನಂದನಾ ಗ್ರಂಥದ ಸಂಪಾದಕ ತಾರಾನಾಥ ಬಲ್ಯಾಯ ಕೃತಿ ಪರಿಚಯ ಮಾಡಿದರು. ಬಸ್ರೂರು ಶಾರದ ಕಾಲೇಜು ಪ್ರಾಂಶುಪಾಲ ರಾಧಾಕೃಷ್ಣ ಶೆಟ್ಟಿ ಮಾರಣಕಟ್ಟೆ ಕ್ಷೇತ್ರದ ದರ್ಮದರ್ಶಿ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು. ಕೆ. ವಿ ಬಾಲಚಂದ್ರ ಶೆಟ್ಟಿ ಸ್ವಾಗತಿಸಿದರು. ಪ್ರತಾಪ ಶೆಟ್ಟಿ ಹಳ್ನಾಡು ಕಾರ್ಯಕ್ರಮ ನಿರ್ವಹಿಸಿ ದಿನಕರ ಶೆಟ್ಟಿ ವಂದಿಸಿದರು. ಬೆಳಿಗ್ಗೆಯಿಂದ ವಿವಿಧ ಗೋಷ್ಟಿಗಳು, ಸಂವಾದ, ತಾಳಮದ್ದಳೆ ನೆರವೇರಿತು.
|
|
|